Sunday, May 10, 2015

ಅಮ್ಮ ನಿನ್ನ ತೋಳಿಗೆ...!



     ಈ ಜೀವನದ ಜೋಳಿಗೆಗೆ ಹೋಳಿಗೆಯನ್ನಿಟ್ಟು, ಆ ಸಿಹಿಯ ಸವಿಯಲ್ಲಿಯೇ ತೇಗುಂಡು, ಕೈತುತ್ತು’ ಪದಕ್ಕೆ ‘ಅರ್ಥ’ಳಾಗಿ, ಅಂಬೆಗಾಲಿನ ಒಯ್ಯಾರಕ್ಕೇ ಹಾತೋರೆದು ಬೆರಗಾಗಿ, ತೋಳಿನ ಓರೆಯಲ್ಲಿ ಮಲಗಿದ್ದ ಸಿಹಿ ನಿದ್ದೆಯ ನೆನಪುಗಳ ಕಂತಿಗೆ ಮುನ್ನುಡಿ ಬರೆದು, ನಾಲಿಗೆ ಜಾರಿದ ತೊದಲುಗಳಿಗೆ ನಯವಾಗಿ ಕಿವಿ ಹಿಂಡುತ್ತಾ ಬದುಕಿಗೆ ದೀವಿಗೆಯಾದ ತ್ಯಾಗಮಯೀ  ನಮ್ಮಮ್ಮನಲ್ಲಿ ಈ ದಿನ ಹಂಬಲಿಸುತಿರುವೆ ಮತ್ತೇ ನಿನ್ನ ತೋಳಿಗೆ..!



    ಒಬ್ಬಟ್ಟಿನ ದಾಹಕ್ಕೆ ಒಂಬತ್ತರ ಕಹಿಯುಂಡ ನಮ್ಮಮ್ಮನಿಗೆ ಏನಾದರು ಕೊಡುವ ಹಂಬಲ ಈ “ತಾಯಂದಿರ ದಿನಾಚರಣೆ”ಗೆ, ಅರಿವಿನ ಬತ್ತಳಿಕೆಯ ಗೊಂದಲದ ನಡುವೆಯೂ ಬಿಡದ ಕನಸಿಗೆ  ಬೆನ್ನೆಳುಬುಗಳಾಗಿ ನಿಂತು ನನಸಿನ ಹಾದಿ ತೋರಿದವರು ನನ್ನವರು. 3 ದಿನದ ಘಳಿಗೆ ಹೊತ್ತು ತಯಾರಿಯಾ ಗೌಜಿನಲ್ಲಿ ವಿಭಿನ್ನತೆಯ ನಾಂದಿಗೆ  ತಾಳಹಾಕುತ್ತಾ, ಹಲವು ಚರ್ಚೆ,ತರ್ಕಗಳ ನಂತರ  ಕುಂಚ ಹಿಡಿದವರಿಗೆ “ಅಮ್ಮನ ಪ್ರೀತಿ”, “ಕಾಲೇಜಿನ ವಿಭಿನ್ನ ನೋಟ” ಛಾಯಾಗ್ರಹಣದ ವಸ್ತುವನ್ನಾಗಿ ಮುಂದಿಟ್ಟುಕೊಂಡು ಸ್ಪರ್ಧೆಗೆ ಕರೆ ಕೊಟ್ಟಿತು. ವಿದ್ಯಾರ್ಥಿಗಳಿಗೆ ಸೂಚಿಸುವ ನಿಟ್ಟಿನಲ್ಲಿ ಎಲ್ಲಾ ತರಗತಿಯ ಮೆಟ್ಟಿಲು ಹತ್ತಿದ ನಮ್ಮವರಲ್ಲಿ ಸಂತಸದ ಜಿನುಗು ಹರಿಯುತಿತ್ತು. ಕಾಲೇಜಿನ ಪ್ರಾಂಶುಪಾಲರ ಅನುಮತಿ ಮೇರೆಗೆ, ಶಿಕ್ಷಕ ಬಂಧುಗಳಿಗೆ ಆಹ್ವಾನ ನೀಡುವಷ್ಟರಲ್ಲಿ ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗ ಹೊರಟಿದ್ದ.
      ಅಂದು ಏಪ್ರಿಲ್ 24 ಶುಕ್ರವಾರ’ದ ಮುಂಜಾನೆಯಿಂದಲೂ ಹುಳಬಿಟ್ಟಂತ್ತಿದ್ದ  ಎಲ್ಲರ ತವಕದ ಚಿತ್ತಕ್ಕೇ ತಿಂಡಿ-ಕಾಫೀಗಳ ಪರಿಯೇ ಇಲ್ಲ, ತರಗತಿಯಲ್ಲಿ ದೇಹ ಮಾತ್ರ ಕುಳಿತಿದ್ದರೆ, ಮನಸ್ಸು ಮಾತ್ರಾ ಕಾರ್ಯಕ್ರಮದ ಚಿತ್ತಾರದಲ್ಲಿ ಮೂಳುಗಿತ್ತು. ಅಪರಾಹ್ನದ ಜೋಂಕು ಮಳೆಗೆ ಒಮ್ಮೆಲೇ ನಮ್ಮ ಹೃದಯ ನಿಂತಂತಾದರು, ಚಿತ್ತದಲ್ಲಿ ಅರಳಿದ ಹೊಸ ಚಿಂತನ ಲಹರಿ ಮತ್ತೆ ನನ್ನ ಬಡಿದೆಚ್ಚರಿಸಿತು. ಮಳೆಯ ಆಡಚಣೆಯಿಂದ ಕಾರ್ಯಕ್ರಮದ ಸ್ಥಳಗಳು ಸ್ವಲ್ಪ ಬದಲಾವಣೆ ಹೊಂದಿದವು ಅಷ್ಟೇ. ಅಂತು ನಿಗದಿಪಡಿಸಿದ ವೇಳೆ ಕೈಗೆ ಸಿಕ್ಕುವಲ್ಲಿ ನಮ್ಮೆಲ್ಲರ ಎದೆಬಡಿತ  ಜೋರಾದಂತಿತ್ತು. ಹಸಿರ ಹರಿದ್ರಾಣಿಯಲ್ಲಿ ಎಲ್ಲ ಇಂಜಿನಿಯರಿಂಗ್ ವಿದ್ಯಾರ್ಥಿಸಮೂಹ ನೆರೆದಂತೆ ಗದ್ದಲ ಮುಗಿಲೆರಿದಂತೆ ಭಾಸ.
      ಅಷ್ಟರಲ್ಲಿ ಹಸಿರಿನ ನಡುವೆ ಓದಿನ ಜೊತೆ ಸೇವೆಯನ್ನು ಗುರಿಯಾಗಿಸಿಕೊಂಡ “ರೆಮೋಸ್-ಚಿಕ್ಕಮಗಳೂರು” ವಿದ್ಯಾರ್ಥಿ ಬಳಗದ ಹೆಸರಿನ ಜೊತೆ “ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ,ಚಿಕ್ಕಮಗಳೂರು” ಎಂಬ ಹೆಸರಿನಿಂದ ಚಿತ್ತಾರಗೊಂಡ  “ಕಾರ್ಯಕ್ರಮದ ಹಲಗೆ ” ಎಲ್ಲರ ದೃಷ್ಟಿಗೂ
ನಾಕುವಂತಿತ್ತು. ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ರವರು ಮಕ್ಕಳಂತೆ ನಮ್ಮೊಂದಿಗೆ ಕೂಡಿ, ಅವರ ಬಾಲ್ಯ ನೆನಪಿಸುತ್ತಾ ಕುಂಚ ಹಿಡಿದು ಉರಿಯುವ ಜ್ಯೋತಿಯನ್ನು  ಸಾಂಕೇತಿಕವಾಗಿ ಬಿಡಿಸುವುದರೊಂದಿಗೆ ಉದ್ಘಾಟಿಸಿ, ಸ್ಪರ್ಧಾಳುಗಳಿಗೆ ಶುಭಕಾಮನೆಯನ್ನು ತಿಳಿಸಿದರು. ಅಮ್ಮನ ಪ್ರೀತಿಯ ಸವಿನೆನಪುಗಳಿಗೆ  ಕುಂಚದಿಂದ ಬಣ್ಣಹಚ್ಚುವ ಕಾಯಕದಲ್ಲಿ ಮೂಳುಗಿದ ಗುಂಪು ಒಂದೆಡೆಯಾದರೆ, ಕ್ಯಾಮರ ಕಣ್ಣಿಂದ ತನ್ನ ಕಾಲೇಜನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಕಲ್ಪನೆಯಲ್ಲಿದ್ದ ವಿದ್ಯಾರ್ಥಿಗಳ  ಸಮೂಹ ತನ್ನದೇಯಾದ ಲೋಕದಲ್ಲಿ ಬೆರೆತು ಅರ್ಥಪೂರ್ಣ ದಿನಾಚರಣೆಗೆ ನಾಂದಿಬರೆದರು.
    ತಾಯಿಯ ಸೇವೆಗೆ ನಮ್ಮದು ಪಾಲಿರಲಿ ಎಂದು ತುಂಬು ಮನಸಿನಿಂದ
ಕಾರ್ಯಕ್ರಮದ ಹಾಗು ಬಹುಮಾನದ ಪ್ರಾಯೋಜಕತ್ವವನ್ನು ವಿದ್ಯಾರ್ಥಿ ಸಹಾಯೀ “ISRASE ಮತ್ತು ಕಾಫೀ ನಾಡಿನ ಚಿಲುಮೆ “ನಮ್ಮ ಚಿಕ್ಕಮಗಳೂರು” ಸಂಸ್ಥೆಗಳು ನಿಭಾಯಿಸಿ ತಾಯೀಯ ಪ್ರೀತಿಗೆ  ಸಣ್ಣ ಕಾಣಿಕೆ ಕೊಟ್ಟು ತಮ್ಮ ಋಣವನ್ನು ಇಳಿಸಿಕೊಂಡರು.  ಕಾರ್ಯಕ್ರಮದಲ್ಲಿ “ರೆಮೋಸ್-ಚಿಕ್ಕಮಗಳೂರು” ಸಮಾಜಸ್ನೇಹಿ ವಿದ್ಯಾರ್ಥಿ ಬಳಗದ  ಸರ್ವ ಸದಸ್ಯರು, ಕಾಲೇಜಿನ ಎಲ್ಲ ಪ್ರಾಚಾರ್ಯರು, ಪ್ರಾಯೋಜಕರು, ಎಲ್ಲಾ ನನ್ನ ಕಾಲೇಜಿನ ಗೆಳೆಯ, ಗೆಳತಿಯರು ಈ ಅರ್ಥಪೂರ್ಣ  ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು. ತಾಯೀಯ ಅದ್ಭುತ ಕಲ್ಪನೆಯಾ ಚಿತ್ರಸಮೂಹದ ಕರ್ತರಿಗೆ  ಕೈಮುಗಿಯುತ್ತಾ, ಅಂತಿಮ ಘಟ್ಟದ ಪಲಿತಾಂಶವನ್ನು ಮೇ 1 ರಂದು ನಡೆದ
“ಚುಂಚನ” ಕಾಲೇಜಿನ ಸಾಂಸ್ಕ್ರತಿಕ ಉತ್ಸವದ  ಮೆರಗಿನಲ್ಲಿ  ಕಾಲೇಜಿನ ಪ್ರಾಂಶುಪಾಲರು ವಿಜೇತರಿಗೆ  ಬಹುಮಾನ ನೀಡಿ ಗೌರವಿಸಿದರು.


  ಮೇ 10 ರ  “ತಾಯಂದಿರ ದಿನಾಚರಣೆ”ಯ ಹಿನ್ನಲೆಯಲ್ಲಿ ನನ್ನ ಸಮೂಹದಿಂದ 

ಮೂಡಿಬಂದ ಈ ಚಿತ್ತವೃತ್ತಿಯನ್ನು ಅಂಬರದ ಚಂದಮಾಮ  ತೋರಿಸುತ್ತಾ 

ಕೈತುತ್ತು ನೀಡಿ, ನನ್ನೆಲ್ಲಾ ಚೇಷ್ಟೆಯಸಹಿಸಿ, ಹಟಕ್ಕೆ ಮಣಿದ ಪ್ರೀತಿಯ ನಮ್ಮ 

ಅಮ್ಮನಿಗೆ ಈ ನನ್ನ ಚಿಕ್ಕ ಕಾಣಿಕೆ.

No comments:

Post a Comment